Tuesday, August 16, 2011

ಇನ್ನೊಂದು ಸೆರೆ

ಇನ್ನೊಂದು ಸೆರೆ
ಸತ್ಯದ ಬಂಧನ
ಇನ್ನೊಂದು ಮುರಿಯುತು ಆಂಧೋಲನ

ಸುಳ್ಳಿನ ಬಾಜಾರ
ರಾಜಕೀಯ ವ್ಯಭಿಚಾರ
ಏರಿದೆ ಅತ್ಯಾಚಾರ
ಮುಕುಟ ಧರಿಸಿ
ರಾಜಿಸುತ್ತಿದ್ದಾನೆ  ಭ್ರಷ್ಟಾಚಾರ

ಕಂಡ ಕಂಡಲ್ಲಿ ಮೋಸಗಾರರು
ಹಣದ  ದಾಸರು
ಲಂಚಾವತಾರದ ಶೂರರು
ಸಭ್ಯ ದರೋಡೆಕೋರರು

ಮದ್ಯಪಾನ ವ್ಯಾಪಾರ
ಕಳ್ಳತನ ವ್ಯವಾಹಾರ
ಅಹಿಂಸಾವಾದಿ ನೀತಿಗೆ ಪ್ರಹಾರ
ಬಡತನ ಶಾಪದ ಭಾರ

ಸತ್ಯಕ್ಕೆ ಉಪವಾಸದ ಸಜಾ
ಸುಳ್ಳಿಗೆ  ಗೌರವದ ಮಜಾ
ಬೆತ್ತಲೆ ಸಮಾಜ
ಎಲ್ಲಾ  ಬಿಟ್ಟವನೇ ರಾಜ
by  ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...