Sunday, August 14, 2011

ಬಾತುಕೋಳಿಯ ಕತೆ

ಸರೋವರದಲ್ಲಿ ಕುಳಿತ
ಬಾತುಕೋಳಿಯನ್ನು  ಕೇಳಿದೆ  ನಾ
"ನಿನ್ನ ಮುಖ ಎಷ್ಟು ಸುಂದರ ಶಾಂತ
ಕಾಣುವಿ ನೀ ತುಂಬಾ ಪ್ರಶಾಂತ
ನಯವಾದ  ಕೋಮಲ ನಿನ್ನ ರೂಪ
ನನಗೂ ಬೇಕು ನಿನ್ನ ಜೀವನದ ಸ್ವರೂಪ "
ಬಾತುಕೋಳಿ ಹೇಳಿತು ನಕ್ಕು
"ಕೇಳು ನೀನು ನನ್ನ ಕತೆ 
ನಾನೂ ಪಡುತ್ತೇನೆ ವ್ಯತೆ
ಕಳೆಯುತ್ತೇನೆ ಜೀವನವನ್ನು ಶಾಂತಿಯಿಂದ
ಇದರ ಕಾರಣ ನೀರಿನ ಅಡಿಯಲ್ಲಿ ನನ್ನ ಕಾಲುಗಳು
ಸತತ ನಡೆಸುತ್ತಿರುವ ಜೀವನದ ಹೋರಾಟದಿಂದ "
"ನೀನೂ ನಡೆ ನನ್ನ ಮಾರ್ಗ 
ಜೀವನದಲ್ಲಿ ಸತತ ಶ್ರಮಿಸಿ ದುಡಿದು
ನೀ ಜೀವನವನ್ನು ಮಾಡಿಕೋ ಸ್ವರ್ಗ"
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...