Saturday, August 13, 2011

ರಕ್ಷಾ ಬಂಧನ

ನಿನ್ನ ನೆನಪು ಕಾಡುತ್ತಿದೆ 
ಈ ದಿನ ರಕ್ಷಾ ಬಂಧನ

ನಿನ್ನ ಸಿಹಿ ನಗೆ
ನಿನ್ನ ಮುಗ್ದವಾದ ಕೋಪ
ನನ್ನ ಮಾತನ್ನು ತಾಳ್ಮೆಯಿಂದ ಕೇಳುವುದು
ನಿನ್ನ ಜಗಳವಾಡುವುದು
ನಂತರ ಪ್ರೀತಿಯಿಂದ ಕೊಂಡಾಡುವುದು
ದುಃಖದಲ್ಲಿದ್ದಾಗ
ನನ್ನನ್ನು ನಗಿಸುವುದು

ಸಂಜೆಯ ಸಮಯ ನನ್ನ ನಿನ್ನ
ವಿಷಯ ಮಾತನಾಡುವುದು
ನನ್ನ ಮೂರ್ಖತನಕ್ಕೆ ನಗುವುದು
ನನ್ನ ತಪ್ಪಿಗೆ ಬೈಯುವುದು
ನಂತರ ನನಗೆ ಬುದ್ದಿವಾದ ಹೇಳುವುದು
ತಾಯಿಯಾಗಿ , ಮಿತ್ರನಾಗಿ
ನನ್ನನ್ನು ಕಾಪಾಡುವುದು

ರಕ್ಷಾ ಬಂಧನದ ದಿವಸ
ನನಗೆ ತಿಲಕ ಮಾಡಿ
ಗಂದದ ಕೈಯನ್ನು 
ನನ್ನ ಮುಖಕ್ಕೆ ಹಚ್ಚಿ ನಗುವುದು
ನನಗೆ ರಾಖಿ ಕಟ್ಟಿ
ಮಿಟಾಯಿ ತಿನ್ನಿಸಿ
ಹೃದಯದಿಂದ  ಆಶಿರ್ವಾದಿಸುವುದು

ನಿನ್ನ ನೆನಪು ಕಾಡುತ್ತಿದೆ 
ಈ ದಿನ ರಕ್ಷಾ ಬಂಧನ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...