Tuesday, July 12, 2011

ಬೇಡ ಬೇಡ ಈ ಜೀವನ

ಬೇಡ ಬೇಡ ನನಗೆ ಈ ಜೀವನ
ನರಕ ಯಾತನ
ನನ್ನದೇನು ತಪ್ಪು
ಬಡವನೆಂದು ಏಕೆ ಹೀಯಾಳಿಕೆ
ಕಳೆಯುತಿದ್ದೇನೆ ಕಾಲ
ಅಲ್ಲಿ ಇಲ್ಲಿ ಬಿಕ್ಷೆ ಬೇಡುತ್ತಾ
ಕನಸು ಕಾಣುವುದೇ ಆಗಿದೆ ಕಷ್ಟ
ನನಗಿಲ್ಲ ವಸಂತ ಋತು
ನನಗಿಲ್ಲ ಹಬ್ಬ , ಹರಿಗಳು
ಎಲ್ಲರಿಗೆ ನಾನು ಒಂದು
ಹಾಳು ಬಿಕಾರಿ
ನಾನು ಪಾಪಿ
ನಾನು ಅಧರ್ಮಿ
ನಾನು ಒಂದು ಬೇಡವಾದ ವಸ್ತು
ಬೇಡ ಬೇಡ ನನಗೆ ಈ ಜೀವನ
ನರಕ ಯಾತನ

by ಹರೀಶ್ ಶೆಟ್ಟಿ ,ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...