Saturday, July 30, 2011

ಹೂವೊಂದು ಅರಳಿತು



ಹೂವೊಂದು ಅರಳಿತು
ಜೀವನದ  ಸುಖವ
ಅನುಭವಿಸುತ ನಲಿಯಿತು

ಅವಳ ಜೀವನವು ಹಾಗೆಯೇ
ಹೂವಿನ ಪುಟ್ಟ ಬಾಳಿನಂತೆ
ಪರಿಮಳ ಬೀರುತ
ಸುಗಂಧ ಹಂಚುತ
ಸುಖಮಯ ಆಗಿತು ಅವಳ ಜೀವನ

ಆದರೆ ಬಂತು ಒಂದು ತಿರುವು
ಕಾಯಿಲೆಯ ಅರಿವು
ವೈಧ್ಯ ತಪಾಸಣೆ  ಮುಗಿದಿತ್ತು 
ಇರಲಿಲ್ಲ ಆ ಕಾಯಲೆಯ ವಿಚಾರ
ಕೇಳುತ್ತಲೇ ಆಘಾತವಾಯಿತು

ಶೋಕ ಸಂಕೋಚದಿಂದ
ಅವಳು ಮೌನಲಾದಳು
ಅವಳ ಮುಖ ಬಾಡಿತು
ನಾನು ಮೂಕನಾದೆ
ಇಬ್ಬರ ಕಣ್ಣಿನಿಂದ
ನೀರು ಸುರಿಯುತಿತ್ತು

ನಡೆಯುತ್ತಲೇ ಹೋಗುತ್ತಿದ್ದೆವು 
ರಸ್ತೆಯಲ್ಲಿ ಬರುವ ಹೋಗುವವರ
ಬಗ್ಗೆ ಎಂಥದು ಗೋಚರವಿಲ್ಲ
ಅವಳು ಮೌನ ,ನಾನು ಮೌನ

ಕಡೆಗೆ ನಾನೇ
ಮಾತನಾಡಲು ಪ್ರೇರೇಪಿಸಿದೆ
"ಹೋಗಲಿ ಬಿಡು,
ನಮ್ಮ ಕೈಯಲ್ಲಿ ಏನಿದೆ "
ಜೋರಾಗಿ ಅತ್ತಳು ,
"ನನಗೇಕೆ ಈ ಶಾಪ ,
ನಾನು ಯಾವಾಗಲು
ಯಾರದು ಹಾಳು ಬಯಸಿಲ್ಲ"

ನನ್ನ ಹೃದಯ ಕೂಗಿತು
ಹೇಗೆ ಅವಳಿಗೆ ಸಮಾಧಾನ ಹೇಳಲಿ
"ನಾನಿದ್ದೇನೆ ಅಲ್ಲ , ನೀನು ಚಿಂತಿಸ ಬೇಡ "
"ನೀ ನನ್ನನ್ನು ಬಿಡುವುದಿಲ್ಲವೇ ?
ನೀ ಹೇಗೆ ನನ್ನೊಟ್ಟಿಗೆ ಇರುವಿ"
"ಇಷ್ಟೇನಾ ನನ್ನನ್ನು ನೀ ತಿಳಿದಿದ್ದು
ಆ ವಿಚಾರ ಬೇಡ "

ಬೇಗನೆ ಸಮಯ ಕಳೆಯಿತು
ಅವಳ ಬಾಳು ಮುಗಿಯಿತು
ಅರಳಿದ ಹೂವಿನ ಬಾಳು ಮುಗಿಯಿತು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...